Discover millions of ebooks, audiobooks, and so much more with a free trial

Only $11.99/month after trial. Cancel anytime.

Hudugiyarige Maathra
Hudugiyarige Maathra
Hudugiyarige Maathra
Ebook193 pages2 hours

Hudugiyarige Maathra

Rating: 3 out of 5 stars

3/5

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN6580201100057
Hudugiyarige Maathra

Read more from Yandamoori Veerendranath

Related to Hudugiyarige Maathra

Related ebooks

Reviews for Hudugiyarige Maathra

Rating: 3 out of 5 stars
3/5

1 rating0 reviews

What did you think?

Tap to rate

Review must be at least 10 words

    Book preview

    Hudugiyarige Maathra - Yandamoori Veerendranath

    http://www.pustaka.co.in

    ಹುಡುಗಿಯರಿಗೆ ಮಾತ್ರ

    Hudugiyarige Maathra

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಒಳ ಪುಟಗಳಲ್ಲಿ....

    1.      ಪುರುಷೋತ್ತಮನ ಫೋಟೋ

    2.      ಸರ್ವೇಜನೋ ಸುಖಿನೋ ಭವಂತು

    3.      ಹುಡುಗಿಯರಿಗೆ ಮಾತ್ರ!

    4.      ಆರೂ-ಒಂಭತ್ತು

    5.      ಹುಡುಗಿ ತುಂಬಾ ಫಾಸ್ಟ್!

    6.      ಮಂಜಿನ ಹನಿ

    7.      ಅದ್ವೈತ

    8.      ಸ್ಟ್ರಗಲ್ ಫಾರ್ ಎಗ್‍ಜಿûಸ್ಟೆನ್ಸ್

    9.      ವಿದಾಯ

    ಪುರುಷೋತ್ತಮನ ಫೋಟೋ

    ಪುರುಷೋತ್ತಮರಾವ್ ಹೃದಯ ಬಡಿತಮಾತ್ರ ಕೇಳಿಸುತ್ತಿದೆ ಅಲ್ಲಿ, ಅಷ್ಟೊಂದು ನಿಶ್ಯಬ್ದವಾಗಿದೆ ವರಾಂಡವೆಲ್ಲ. ಪುಷ್‍ಡೋರಿನ ಪಕ್ಕದಲ್ಲಿ ಕುಳಿತಿರುವ ಅಟೆಂಡರ್ ಕಣ್ಣುಮುಚ್ಚಿ ಧ್ಯಾನದಲ್ಲಿದ್ದಾನೆ.

    ಆ ವಾತಾವರಣವೇ ಒಂದು ರೀತಿಯ ಗಾಂಭೀರ್ಯದಿಂದ ತುಂಬಿದೆ.

    ಅಕ್ಕಪಕ್ಕದ ಕುರ್ಚಿಗಳೆಲ್ಲ ಖಾಲಿಯಾಗಿವೆ. ಆತನೇ ಕೊನೆಯ ವಿಸಿಟರ್. ಯಾವಾಗ ತನ್ನನ್ನು ಕರೆಯುತ್ತಾರೋ ಎಂದು ಚಡಪಡಿಸುತ್ತಿದ್ದಾನೆ. ಒಳಗೆ ಕಮೀಷನರ್‍ರೊಡನೆ ಯಾರೋ ಮಾತನಾಡುತ್ತಿದ್ದಾರೆ.

    ಪುರುಷೋತ್ತಮರಾವ್‍ಗೆ ಅದೇಕೋ ಮತ್ತಷ್ಟು ಭಯವಾಗುತ್ತಿದೆ. ತನ್ನನ್ನೇಕೆ ಕರೆಸಿದ್ದಾರೋ ಅರ್ಥವಾಗುತ್ತಿಲ್ಲ, ಬೆಳೆಗ್ಗೆ ತನಗೆ ಕರೆ ಬಂದಾಗಿನಿಂದ ಹೃದಯದ ಬಡಿತ ಒಂದೇ ಸಮನೆ ಇದೆ. ತಾನೇನು ತಪ್ಪು ಮಾಡಿದ್ದೇನೋ ಎಂದು ಕ್ಷಣಕ್ಷಣಕ್ಕೂ ಆತಂಕಪಡುತ್ತಿದ್ದಾನೆ.

    ಆತ, ಮೂವತ್ತು ವರ್ಷಗಳಿಂದಲೂ ಅದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ.  ಮೊದಲು ಎಸ್.ಡಿ.ಸಿ. ಆಗಿ ಈಗ ಹತ್ತು ವರ್ಷಗಳಿಂದ ಎಫ್.ಡಿ.ಸಿ. ಆಗಿ ಒಮ್ಮೆ ಮಾತ್ರ ಲಂಚ ತಿಂದು-ಸಿಕ್ಕಿ ಹಾಕಿಕೊಂಡು ಕೆಲಸವೇ ಕಳೆದುಕೊಳ್ಳುವ ಸ್ಥಿತಿ ಒದಗಿತ್ತು. ಈಗಿನ್ನೇನು ನಿವೃತ್ತಿಯ ದಿನವನ್ನು ಕಾಯುತ್ತಿದ್ದಾನೆ. ಅದು ಎಷ್ಟೋ ದೂರದಲ್ಲಿಲ್ಲ. ಕೇವಲ ಎರಡು ವರ್ಷ ಮಾತ್ರ ಇದೆ.

    ಕಮೀಷನರ್ ಕುಮಾರ್, ಐ.ಎ.ಎಸ್. ತನ್ನನ್ನು ಏತಕ್ಕಾಗಿ ಕರೆಸಿರಬಹುದೆಂದು ಪರಿಪರಿಯಾಗಿಯೋಚಿಸುತ್ತಿದ್ದಾನೆ. ಕುಮಾರ್ ಚಾಕುವಿನಷ್ಟು ತೀಕ್ಷ್ಣವಾದ ವ್ಯಕ್ತಿ. ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಒಳ್ಳೆಯ ಹೆಸರನ್ನು ಸಂಪಾದಿಸಿದ್ದ. ಆಫೀಸಿಗೆಲ್ಲಾ ಅತ್ಯಂತ ಉಚ್ಚ ಹುದ್ದೆಯಲ್ಲಿರುವ ಈ ಅಧಿಕಾರ, ಒಟ್ಟು ಯಂತ್ರದಲ್ಲಿ ಒಂದು ಬೋಲ್ಟಿನಂತಿರುವ ತನ್ನನ್ನು ಕರೆಸಿದ್ದಾದರೂ ಏಕೆ? ಅದರಲ್ಲೂ ಆತ ಅಧಿಕಾರ ವಹಿಸಿಕೊಂಡು ಇನ್ನೂ ಮೂರು ತಿಂಗಳಾಗಿಲ್ಲ.

    ಹೇಗೂ ರಿಟೈರ್ ಆಗುತ್ತಿದ್ದೇನೆಂಬ ಧೈರ್ಯದಿಂದ ಈಗ್ಗೆ ಕೆಲವು ದಿನಗಳಿಂದ ಸ್ವಲ್ಪಸ್ವಲ್ಪವಾಗಿ ಲಂಚ ತೆಗೆದುಕೊಳ್ಳುತ್ತಿರುವುದು ಆತನಿಗೇನಾದರೂ ಗೊತ್ತಾಗಿ ಅದಕ್ಕೆ ಎಚ್ಚರಿಕೆ ಹೇಳಲು ಇರಬಹುದೇ? ಇಲ್ಲದಿದ್ದರೆ ತಾನು ಪುಟಪ್ ಮಾಡಿದ ನೋಟಿನಲ್ಲಿ ಏನಾದರೂ ದೊಡ್ಡ ತಪ್ಪಾಗಿ... ?

    ಪುಷ್‍ಡೋರಿನ ಶಬ್ದವಾಗುತ್ತಿದ್ದಂತೆ ತನ್ನ ಆಲೋಚನೆಗೆ ತಡೆ ಹಾಕಿ ಅತ್ತ ನೋಡಿದ. ತನ್ನ ಕೆಲಸ ಮುಗಿದ ಸಂತೃಪ್ತಿಯಿಂದ ಆ ವಿಸಿಟರ್ ಹೊರಬರುತ್ತಿದ್ದಾನೆ. ಕಾಲಿಂಗ್ ಬೆಲ್ಲಿನ ಶಬ್ದ! ಅರ್ಧ ನಿದ್ರೆಯಲ್ಲಿದ್ದ ಅಟೆಂಡರ್ ತಡಬಡಿಸಿ ಮೇಲೆದ್ದು ಒಳಗೆ ಓಡಿದ. ತನಗೇ ಆ ಕರೆ ! !

    ನಡುಗುತ್ತಿರುವ ಹೆಜ್ಜೆಗಳಿಂದ ಒಳಗೆ ಕಾಲಿಟ್ಟ ಪುರುಷೋತ್ತಮ. ವಿಶಾಲವಾದ ರೋಮಿನ ಆ ಕೊನೆಯಲ್ಲಿರುವ ಕುಮಾರ್ ಕುಷನ್ ಛೇರಿನಲ್ಲಿ ಕುಳಿತು ಮುಂದಿದ್ದ ಟೇಬಲ್ಲಿನ ಮೇಲೆ ಮೊಣಕೈಯನ್ನು ಊರಿಕೊಂಡು ಫೈಲಿನಲ್ಲಿ ತಲೆಯಿರಿಸಿದ್ದಾನೆ. ಟೈಯನ್ನು ಸಡಿಲಿಸಿ, ಶರ್ಟಿನ ತುಂಬತೋಳುಗಳನ್ನು ಮೊಣಕೈಯವೆರೆವಿಗೂ ಮಡಿಸಿ ತನ್ನ ಕೆಲಸದಲ್ಲಿ ತಲ್ಲೀನನಾಗಿದ್ದಾನೆ. ಸುಮಾರು ಮೂವತ್ತು ವರ್ಷಗಳ ಆಕರ್ಷಕ ವ್ಯಕ್ತಿ, ಬೆಳಿಗ್ಗೆಯಿಂದ ಕೆಲಸ ಮಾಡಿದ ಆಯಾಸ ಮುಖದಲ್ಲಿ ಕಂಡರೂ ಅದರಲ್ಲಿಯೂ ಒಂದು ರೀತಿಯ ಸೆಳೆತವಿದೆ. ಗುಂಗುರು ಕೂದಲಿನ ಮುಂಗುರುಳೊಂದು ವಿಶಾಲವಾದ ಹಣೆಯ ಮೇಲೆ ಅತ್ತಿತ್ತ ಆಡುತ್ತಿದೆ ಫ್ಯಾನಿನ ಗಾಳಿಗೆ.

    ಪುರುಷೋತ್ತಮನಿಗೆ ಏನು ಮಾಡಬೇಕೋ ಅರ್ಥವಾಗಲಿಲ್ಲ. ಕುಮಾರ್ ಏಕಾಗ್ರತೆಯಲ್ಲಿ ಫೈಲನ್ನು ಓದುತ್ತಿದ್ದಾನೆ. ಕುರ್ಚಿಯಲ್ಲಿ ಕುಳಿತುಕೊಳ್ಳುವ ಸಾಹಸವನ್ನು ಮಾಡಲಿಲ್ಲ ಆತ. ಆ ಡಿಪಾರ್ಟ್‍ಮೆಂಟಿನಲ್ಲಿ ಅಂತಹ ಆಲೋಚನೆಗೇ ಸಾಧ್ಯವಿಲ್ಲ.

    ಅದೇಕೋ ತನಗೇ ತಿಳಿಯದಂತೆ ತನ್ನ ಗತಕಾಲದ ನೆನಪಾಯಿತು ಪುರುಷೋತ್ತಮನಿಗೆ. ಆ ವಯಸ್ಸಿನಲ್ಲಿ ತಾನು ಹೇಗಿದ್ದೆ? ಆ ಯೌವನದ ಬಿಸಿಯಲ್ಲಿ ಸ್ನೇಹಿತರ ಜೊತೆ ಅರ್ಧರಾತ್ರಿಯವರೆವಿಗೂ ತಿರುಗಾಟ, ಬೇಜವಾಬ್ದಾರಿಯ ಜೀವನ... ಈ ಹುಡುಗ ಇಷ್ಟು ಚಿಕ್ಕ ವಯಸ್ಸಿಗೇ ಅತಿ ಗಂಭೀರ ಬೆಳೆಸಿಕೊಂಡಿದ್ದಾನೆ. ಹೌದು ಮತ್ತೆ, ಇಷ್ಟೊಂದು ಗಾಂಭೀರ್ಯ ಮತ್ತು ಬಿಗಿಯನ್ನು ಪಡೆಯದಿದ್ದರೆ ಇಂತಹ ಜವಾಬ್ದಾರಿ ಕೆಲಸವನ್ನು ನಿರ್ವಹಿಸಲು ಅದ್ಹೇಗೆ ಸಾಧ್ಯ?

    ಅರೆ-ನೀವು ನಿಂತೇ ಇದ್ದೀರಲ್ಲಾ ಕುಳಿತುಕೊಳ್ಳಿ – ತಲೆ ಎತ್ತಿದ ಕುಮಾರ್ ಮುಗುಳ್ನಗುತ್ತಾ ಹೇಳಿದ. ಬೆಲ್ ಹೊಡೆದು ಅಟೆಂಡರ್‍ನನ್ನು ಕರೆದು ಮತ್ತಾರನ್ನೂ ಒಳಗೆ ಬಿಡದಂತೆ ಸೂಚಿಸಿದ.

    ಕುಳಿತುಕೊಳ್ಳಿ ಪ್ಲೀಸ್. ಇನ್ನೊಂದೈದು ನಿಮಿಷ ಹೊರಡೋಣ ಎನ್ನುತ್ತಾ ಪುರುಷೋತ್ತಮ ಕುಳಿತುಕೊಳ್ಳುತ್ತಿದ್ದಂತೆಯೇ ಫೈಲಿನಲ್ಲಿ ಮುಳುಗಿದ.

    ತಾನು ಕುರ್ಚಿಯಲ್ಲಿ ಕುಳಿತಿದ್ದೇನೆಂಬ ವಿಷಯವೊಂದನ್ನು ಬಿಟ್ಟು ಪುರುಷೋತ್ತಮನಿಗೆ ಬೇರೇನೂ ಅರ್ಥವಾಗಲಿಲ್ಲ. ಅಷ್ಟು ದೊಡ್ಡ ಅಧಿಕಾರಿಯ ಮುಂದೆ ತಾನು ಕುಳಿತಿರುವುದು ತುಂಬಾ ಮುಜುಗರವಾಗಿದೆ. ಅದಕ್ಕಿಂತಲೂ ಆತಂಕದ ವಿಷಯವೆಂದರೆ ತನ್ನನ್ನು ಕರೆಸಿದ ಕಾರಣ ತಿಳಿಯದೇ ಇರುವುದು. ಕೈ ಕಟ್ಟಿಕೊಂಡು ಅಧಿಕಾರಿಗಳಿಂದ ಬೈಯ್ಗಳು ತಿಂದ ರೂಢಿಯೇ ಹೆಚ್ಚಾಗಲಿ, ಈ ರೀತಿಯ ಆದರಣೆಯ ಬಗ್ಗೆ ಅನುಭವವಿರಲೇ ಇಲ್ಲ ಅವನ ಮೂವತ್ತು ವರ್ಷಗಳ ಸರ್ವೀಸಿನಲ್ಲಿ.

    ನಾವಿನ್ನು ಹೊರಡೋಣವೆ? ಎನ್ನುತ್ತಾ ಮೇಲೆದ್ದು ಕುಮಾರ್. ಎಲ್ಲಿಗೆ ಎಂದು ಕೇಳದೆ ಅವನನ್ನು ಅನುಸರಿಸಿದ. ಇಬ್ಬರೂ ರೂಮಿನಿಂದ ಹೊರಬಂದು.

    ಮೆಟ್ಟಿಲುಗಳ ಬಳಿ ಕಾರನ್ನು ತಂದು ನಿಲ್ಲಿಸಿ, ಕೂಡಲೇ ಕೆಳಗಿಳಿದು ನಮ್ರತೆಯಿಂದ ಕೈ ಕಟ್ಟಿನಿಂತ ಡ್ರೈವರ್. ಜವಾನನೊಬ್ಬ ಬ್ರೀಫ್‍ಕೇಸನ್ನು ಕಾರಿನೊಳಗೆ ತಂದಿಟ್ಟ. ಪಿ.ಎ. ವರಾಂಡದ ಕೊನೆಯಲ್ಲಿ ಕೈ ಕಟ್ಟಿ ನಿಂತಿದ್ದಾನೆ. ಬೆಳ್ಳಗಿನ ಫಿಯಟ್ ಕಾರು ಸಂಜೆಯ ಬಿಸಿಲಿಗೆ ಹೊಳೆಯುತ್ತಿದೆ.

    ನೀನು ಜೀಪಿನಲ್ಲಿ ಆ ಮೇಲೆ ಬಾ ಎನ್ನುತ್ತಾ ಡ್ರೈವರ್‍ಗೆ ಹೇಳಿ ತಾನೇ ಸ್ಟಿಯರಿಂಗ್ ಮುಂದೆ ಕುಳಿತ ಕುಮಾರ್. ಎಡಗಡೆಗೆ ಬಗ್ಗಿ ಡೋರನ್ನು ತೆಗೆಯುತ್ತಾ ಬನ್ನಿ ಕುಳಿತುಕೊಳ್ಳಿ ಎಂದ ಪುರುಷೋತ್ತಮನನ್ನು ಕುರಿತು. ಕನಸಿನಲ್ಲಿ ಎಂಬಂತೆ ಅವನು ಒಳಗೆ ಕುಳಿತ. ಮೆತ್ತನೆಯ ಸೀಟು ಹಿತವಾಗಿತ್ತು.

    ಕಾರು ಮುಂದೆ ಸಾಗಿತು.

    ತುಂಬಾ ಹೊತ್ತು ಕುಮಾರ್ ಮಾತನಾಡಲಿಲ್ಲ. ಒಂದು ಕೈಯನ್ನು ಸ್ಟೈಲ್ ಆಗಿ ವಿಂಡೋ ಮೇಲಿಟ್ಟು ಏಕಾಗ್ರತೆಯಿಂದ ಡ್ರೈವ್ ಮಾಡುತ್ತಿದ್ದಾನೆ. ಕಾರಿನೊಳಗೆ ತಣ್ಣಗೆ ಬೀಸುತ್ತಿರುವ ಗಾಳಿ ಆಹ್ಲಾದಕರವಾಗಿದೆ.

    ಎಷ್ಟು ಜನ ಮಕ್ಕಳು ನಿಮಗೆ ಪುರುಷೋತ್ತಮ್‍ರವರೇ?

    ಮೂರು ಹೆಣ್ಣು – ಇಬ್ಬರು ಗಂಡು ಮಕ್ಕಳು ಸಾರ್ – ವಿನಯದಿಂದ ಹೇಳಿದ.

    ಹುಡುಗರು ಏನು ಮಾಡುತ್ತಿದ್ದಾರೆ?

    ದೊಡ್ಡವನು ಬಿ.ಎ. ಮುಗಿಸಿದ್ದಾನೆ. ಎರಡನೆಯವನು ಎಸ್ಸೆಸ್ಸೆಲ್ಸಿಯವರೆಗೂ ಓದಿ ಮನೆಯಲ್ಲಿಯೇ ಇದ್ದಾನೆ.

    ಹೆಣ್ಣು ಮಕ್ಕಳೆಲ್ಲಾ ದೊಡ್ಡವರೆಂದುಕೊಂಡಿದ್ದೇನೆ

    ಹೌದು ಸಾರ್

    ಕುಮಾರ್ ತಲೆತಿರುಗಿಸಿ ಅವನೆಡೆಗೆ ಮುಗುಳ್ನಗುತ್ತಾ, ನನ್ನನ್ನು ನೀವು ‘ಸಾರ್’ ಎನ್ನುವ ಅಗತ್ಯವಿಲ್ಲ ಈಗ. ಇದು ಆಫೀಸ್ ಅಲ್ಲವಲ್ಲಾ ಎಂದ. ಪುರುಷೋತ್ತಮ ಏನೂ ತಿಳಿಯದ ಭಾವದಿಂದ ತಬ್ಬಿಬ್ಬಾದ.

    ನಿಮ್ಮ ಮನೆಯೆಲ್ಲಿದೆ ಪುರುಷೋತ್ತಮ್?

    ಗಾಂಧೀಪಾರ್ಕಿನ ಪಕ್ಕದ ರಸ್ತೆಯಲ್ಲಿ ಸಾರ್!

    ಮೊದಲು ನಮ್ಮ ಮನೆಗೆ ಹೋಗೋಣ ಕುಮಾರ್ ಡ್ರೈವ್ ಮಾಡುತ್ತಾ ತಲೆ ತಿರುಗಿಸದೇ ಹೇಳಿದ. ಏತಕ್ಕೆಂದು ಕೇಳಲಾರದೇ – ಆ ಸಾಹಸವನ್ನು ಮಾಡದೇ ಸುಮ್ಮನಿದ್ದ ಪುರುಷೋತ್ತಮ.

    ಕಾರು ಟಾರ್ ರಸ್ತೆಯ ಮೇಲೆ ಮೃದುವಾಗಿ ಹರಿಯುತ್ತದೆ.

    ಸರೋಜಿನಿ ನಿಮಗೆ ಗೊತ್ತೆ ಮಿ. ಪುರುಷೋತ್ತಮ್? ಆ ಹೆಸರೆಲ್ಲಿಯಾದರೂ ಕೇಳಿದ್ದೀರಾ?

    ಹಠಾತ್ತನೆ ಬಂದ ಈ ಪ್ರಶ್ನೆಗೆ ಪಕ್ಕದಲ್ಲೇ ಸಿಡಿಯುವ ಬಾಂಬೊಂದನ್ನು ಕಂಡಂತೆ ಬೆಚ್ಚಿಬಿದ್ದ ಪುರುಷೋತ್ತಮರಾಮ್, ಕುಮಾರ್ ಕಡೆ ನೋಡಿದ. ಕುಮಾರ್ ರೋಡಿನ ಮೇಲೆಯೇ ದೃಷ್ಟಿ ಇರಿಸಿದ್ದಾನೆ. ಮುಖದಲ್ಲಿ ಯಾವ ಭಾವನೆಯ ಎಳೆಯೂ ಸಿಗುತ್ತಿಲ್ಲ.

    ಪುರುಷೋತ್ತಮ ಆ ಕೂಡಲೇ ಉತ್ತರಿಸಲಾರದೆ ತಡಬಡಿಸಿದ. ಈ ಕ್ಷಣದಲ್ಲೂ ಲಕ್ಷ ಆಲೋಚನೆಗಳು ಒಮ್ಮೆಲೇಅವನ ಮನಸ್ಸಿನಲ್ಲಿ ದಾಳಿಮಾಡಲಾರಂಭಿಸಿದವು.

    ಅದೆಷ್ಟೋ ವರ್ಷಗಳ ಹಿಂದೆ ತನ್ನ ಜೀವನದಲ್ಲಿ ಪ್ರವೇಶಿಸಿ ಮರೆಯಾದ ಸರೋಜಳ ಬಗ್ಗೆ ಇವನೇಕೆ ಈಗ ಪ್ರಶ್ನಿಸುತ್ತಿದ್ದಾನೆ? ಎಂದೋ ಮರೆತ ಆ ಕಪ್ಪು ಕನಸನ್ನು ಅದೇಕೆ ಹೊರಗೆ ತೆಗೆಯುತ್ತಿದ್ದಾನೆ? ಅವನ ಕಣ್ಣುಗಳ ಮುಂದೆ ಸರೋಜ ಸರಿದಾಡಿದಳು. ತನಗೆ ಅನ್ಯಾಯ ಮಾಡಬೇಡವೆಂದು ಬೇಡಿಕೊಳ್ಳುತ್ತಿರುವ ಸರೋಜ... ತಾನು ಕಾಯಾ, ವಾಚಾ, ಮನಸಾ ಪ್ರೀತಿಸುತ್ತಿರುವುದಾಗಿ ಕೇಳಿಕೊಳ್ಳುತ್ತಿರುವ ಸರೋಜ... ಕೊನೆಯ ಕ್ಷಣದವರೆವಿಗೂ ರಹಸ್ಯವನ್ನು ತನ್ನಲ್ಲೇ ಇರಿಸಿಕೊಂಡು ಮರೆಯಾದ ಸರೋಜ...

    ವರದಕ್ಷಿಣೆಗೆ ಆಸೆಪಟ್ಟು ತಾನು ಲಕ್ಷ್ಮಿಯನ್ನು ಮದುವೆಯಾದ. ಮದುವೆಯ ಮನೆಯ ಸಡಗರದಲ್ಲಿ ತಾನು ಮೆರೆಯುತ್ತಿರುವಾಗ ಬಂದಿತ್ತು ಆ ಸುದ್ದಿ. ಸರೋಜ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ವಿಫಲಳಾಗಿದ್ದಾಳೆಂದೂ, ಅವಳನ್ನು ರಕ್ಷಿಸಲಾಗಿದೆಯೆಂದೂ ಸುದ್ದಿ ಹರಡಿತ್ತು. ತನ್ನ ಮೇಲೂ ಸಾಕಷ್ಟು ಆಪಾದನೆಗಳು ಬಂದವು.

    ಆದರೇನು? ತಾನು ಗಂಡಸು. ಅರ್ಧಗಂಟೆಯಲ್ಲೇ – ಮಂಗಳ ವಾದ್ಯಗಳ ಶಬ್ದದಲ್ಲಿ ಲಕ್ಷ್ಮಿಗೆ ಮೂರು ಗಂಟನ್ನು ಹಾಕಿದ್ದ.

    ನಂತರ ತಿಳಿದ ವಿಷಯ ತಲೆ ಎತ್ತಿ ಓಡಾಡಲಾರದ ಸರೋಜಳ ತಂದೆ, ಮಗಳನ್ನು ಕರೆದುಕೊಂಡು ದೂರ ಹೋದರೆಂದೂ, ನಂತರ ಆತನೂ ಸ್ವಲ್ಪದಿನಗಳಲ್ಲಿ ಮರಣ ಹೊಂದಿದನೆಂದು! ಸರೋಜ ಏನಾದಳೋ ತಿಳಿಯಲಿಲ್ಲ.

    Enjoying the preview?
    Page 1 of 1